ಬಿ.ವಿ ಆಚಾರ್ಯ (ಬಿ. ವಾಸುದೇವ ಆಚಾರ್ಯ) ಕರ್ನಾಟಕ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರು. ಇವರು ಉಡುಪಿ ಜಿಲ್ಲೆಯ ಶಿವಳ್ಳಿ ಮಾಧ್ವ ಬ್ರಾಹ್ಮಣರಾದ ರಾಮಚಂದ್ರ ಆಚಾರ್ಯರವರ ಪುತ್ರ. ಅವರು ಹಲವಾರು ಬಾರಿ ಕರ್ನಾಟಕ ಸರ್ಕಾರದ ಅಡ್ವೊಕೇಟ್ ಜನರಲ್ ಆಗಿದ್ದಾರೆ. ಅವರು ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಗಳಿಸಿದರು. ಕಷ್ಟಗಳು ಮತ್ತು ಬೆದರಿಕೆಗಳ ನಡುವೆಯೂ ಅಲ್ಲಿ ಅವರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ವಿಶೇಷ ವಕೀಲರಾಗಿ ಮೊಕದ್ದಮೆಯನ್ನು ಮುಂದುವರಿಸಿದರು ಮತ್ತು ಅದರ ತಾರ್ಕಿಕ ಅಂತ್ಯವನ್ನು ಪಡೆದರು. ೨೦೧೭ ರಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಅವರು ಭಾರತದ ಅಗ್ರ ಹತ್ತು ವಕೀಲರಲ್ಲಿ ಒಬ್ಬರಾಗಿ ಆಯ್ಕೆಯಾದರು == ಉಲ್ಲೇಖಗಳು ==